ಸ್ವಾಗತ

ಆತ್ಮೀಯ ಸ್ಮರಣೆ ಗೆಳೆಯರಿಗೆ ಹಾರ್ದಿಕ ಸ್ವಾಗತ!

ಕನ್ನಡ ಸಾಹಿತ್ಯ-ಸಂಸ್ಕೃತಿಯನ್ನು ಸ್ಮರಿಸುವ ಉದ್ದೇಶ ಹೊಂದಿರುವ ಅರಿಜೊನ ಕನ್ನಡ ಮಿತ್ರರ ಗುಂಪು, ಶ್ರೀ ಪ್ರಕಾಶ್ ಜೋಷಿ ಯವರ ನೇತೃತ್ವದಲ್ಲಿ ಕಳೆದ ವರ್ಷದಿಂದ ಸ್ಮರಣೆ ಕಾರ್ಯಕ್ರಮ ಆರಂಭಿಸಿರುವುದು ಸರಿಯಷ್ಟೇ. ಪ್ರತಿ ತಿಂಗಳ ಮೂರನೇ ಶನಿವಾರ ಮಧ್ಯಾಹ್ನ ಒಟ್ಟುಗೂಡಿ, ಅಗಾಧ ಕನ್ನಡ ಸಾಹಿತ್ಯ - ಕೃತಿ, ಕರ್ತೃ, ವಿಶೇಷಗಳನ್ನು ಮೆಲುಕು ಹಾಕುವ ವಿಚಾರ ಮಂಟಪವಾಗಿ ಪ್ರಾರಂಭವಾಗಿರುವ "ಸ್ಮರಣೆ" ಕಾರ್ಯಕ್ರಮವು, ಇದುವರಗೆ - ಮಂಕುತಿಮ್ಮನ ಕಗ್ಗ, ದಾಸ ಸಾಹಿತ್ಯ, ವಚನ ಸಾಹಿತ್ಯ, ಬಾಲ್ಯದ ಮೆಚ್ಚಿನ ಪದ್ಯಗಳು, ಕನ್ನಡ ಲೇಖಕಿಯರು - ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದೆ.

ಪ್ರತಿ ಕ್ರಾರ್ಯಕ್ರಮದಲ್ಲೂ ನಾವು ಹಂಚಿಕೊಳ್ಳುವ ಹಲವಾರು ವಿಷಯಗಳು ಕೇವಲ ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರಿಗೆ ಹಾಗು ಆ ಕ್ಷಣಗಳಿಗೆ ಮಾತ್ರ ಸೀಮಿತವಾಗದೆ, ಅದನ್ನು ಇತರ ಕನ್ನಡ ಮಿತ್ರರ ಜೊತೆ ಹಂಚಿಕೊಳ್ಳುವ ಉದ್ದೇಶದಿಂದ ಈ ಬ್ಲಾಗ್ ನ್ನು ಆರಂಭಿಸಲಾಗಿದೆ.

ಕನ್ನಡ ಮಿತ್ರರ ಮನದ ಮಾತುಗಳನ್ನು ಹಂಚಿಕೊಳ್ಳುವ ತಾಣವಾಗಿ ಇದು ಹೊರಹೊಮ್ಮುವುದೆಂಬ ಆಶಯದೊಂದಿಗೆ,

ಪ್ರದೀಪ್

Sunday, January 29, 2012

ಸುಮ್ನೆ ತಲೆ ತಿನ್ನೋಕೆ...

೧.  ಈಗ ಅಸ್ತಿತ್ವದಲ್ಲಿ ಇಲ್ಲದಿರುವ ಬೆಂಗಳೂರಿನ ಈ ಥಿಯೇಟರಗಳು, ಜನ ಸಾಮಾನ್ಯರ ದೃಷ್ಟಿಯಲ್ಲಿ ಇನ್ನೂ ಕಣ್ಮರೆಯಾಗಿಲ್ಲ. ಬಸ್ ನಿಲ್ದಾಣ ಅಥವಾ ವಿಳಾಸ ತಿಳಿಸಲು ಇಂದಿಗೂ ಹೆಸರಿಸಲ್ಪಡುವ ಬೆಂಗಳೂರಿನ ಈ ಥಿಯೇಟರಗಳನ್ನು ಹೆಸರಿಸಿ.
೨. "ಹೊಂಬಿಸಿಲು" ಚಲನಚಿತ್ರದ ಹಾಡಿನ ಹೊರತಾಗಿ, "ಹೊಂಬಿಸಿಲು" ಪದ ಇರುವ ಕನ್ನಡ ಚಿತ್ರ ಗೀತೆ (ಗಳು)ಯನ್ನು ಹೆಸರಿಸಿ
೩. ಗ್ರೀಕ್ ಗೂ, ಕರ್ನಾಟಕಕ್ಕೂ ಸಂಬಂಧ ತಳಕು ಹಾಕಿರುವ ಗ್ರೀಕ್ ನಾಟಕ ಯಾವುದು? ಸಂಬಂಧದ ವಿಶೇಷತೆಯನ್ನು ತಿಳಿಸಿ.
೪. ಕುವೆಂಪು ಮೊದಲು ಬರೆದದ್ದೆಲ್ಲಾ ಇಂಗ್ಲೀಷ್-ನಲ್ಲಿ. ಅವರಿಗೆ ಕನ್ನಡದಲ್ಲಿ ಬರೆಯಲು ಪ್ರೇರೇಪಿಸಿದ್ದು ಯಾರು?
೫. ಯೆಂಡ, ಯೆಡ್ತಿ ಹೋದ್ರೂ ಕನ್ನಡ ಬಿಡಂಗಿಲ್ಲ ಅಂದ ರತ್ನನ ಹೆಂಡ್ತಿ ಯಾರು?
೬. ಗೆಳತಿಯ ಗಂಡನನ್ನು ಮೂದಲಿಸುವ ಇಬ್ಬರು ಹೆಂಗಸರ ವಾದವೇ ಪುರಂದರ ದಾಸರ ಈ ಕೀರ್ತನೆ. ಪಾಪ! ವಿಷ್ಣು ಮತ್ತು ಶಿವ - ಆ ಗಂಡದಿರು. ಯಾವುದೀ ಕೀರ್ತನೆ? 
೭. ಒಗಟುಗಳು 
     ಅ. ಅಂಗಿ ಬಿಚ್ಚಿ ಬಾವಿಗೆ ಹಾರು
     ಆ. ನೀರಲ್ಲಿ ಹುಟ್ಟಿ ನೀರಲ್ಲಿ ಕರಗುವೆನು. ನಾನ್ಯಾರು?
೮. ಬೆಂಗಳೂರಿನ ಮೊದಲ ಮಹಿಳಾ ಪೋಲಿಸ್ ಸ್ಟೇಷನ್ ಆರಂಭವಾದದ್ದು ಎಲ್ಲಿ?
೯. ಬೆಂಗಳೂರು ರೇಡಿಯೋ ನವರು ಮಾತಿಗೊಮ್ಮೆ "ಸಕ್ಕತ್ ಹಾಟ್ ಮಗಾ" ಅಂತಾರೆ ಯಾಕೆ?
೧೦. ಜನಪ್ರಿಯ ಸಂಗೀತ ನಿರ್ದೇಶಕ "ಹಂಸಲೇಖ" ಅವರ ನಿಜ ಹೆಸರು ಏನು?

Saturday, January 21, 2012

ಪುನೀತ್ - ಒಂದು ಹಾಸ್ಯಮಯ ಆದರೂ ಸ್ವಾರಸ್ಯಕರವಾದ ಲೇಖನ !!

ಒಂದು ಹಾಸ್ಯಮಯ ಆದರೂ ಸ್ವಾರಸ್ಯಕರವಾದ ಲೇಖನ !!


ಪುನೀತ್ 

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು


ಕನ್ನಡ ಪುಸ್ತಕ ಪ್ರೀತಿಯುಳ್ಳ ಮಿತ್ರರೆಲ್ಲರಿಗೂ... ಇಲ್ಲಿದೆ ಕನ್ನಡ ಕಾದಂಬರಿ ಹಾಗು ಪುಸ್ತಕಗಳು! ಓದಿ ಆನಂದಿಸಿ!

Please note that links below point to other web sites and contact respective web sites for any questions related to the content.

MK ಇಂದಿರಾ ಕಾದಂಬರಿಗಳು

ಬಿದಿಗೆ ಚಂದ್ರಮ ಡೊಂಕು - MK ಇಂದಿರಾ
ಮುಕ್ತ ಅವರ ಕಾದಂಬರಿಗಳು

ರೇಖಾ ಖಾಖoಡಕಿ ಅವರ ಕಾದಂಬರಿಗಳು 




ಜ್ಯೋತ್ಸ್ನಾ ಕಾಮತ್ 
"ಹೀಗಿದ್ದೇವೆ ನಾವು"  (ಲಲಿತ ಪ್ರಬಂಧಗಳು )

ಅನುಸೂಯ ಸಂಪತ್ ಅವರ ಕಾದಂಬರಿಗಳು 




ಹಾ ಮಾ ನಾಯಕ ಅವರ ಪುಸ್ತಕಗಳು 



ಹಾವು ಮತ್ತು ಹೆಣ್ಣು ( ಕಥಾ ಸಂಗ್ರಹ)

ಚದುರಂಗ 

ತ ರಾ ಸು ಅವರ ಪುಸ್ತಕಗಳು

ಹಿಂತಿರುಗಿ ನೋಡಿದಾಗ (ತ ರಾ ಸು ಅವರ ಜೀವನ ಚರಿತ್ರೆ )




ನೃಪತುಂಗ


ಜಿ ಪಿ ರಾಜರತ್ನಂ ಅವರ ಪುಸ್ತಕಗಳು 




SL ಭೈರಪ್ಪ
K P ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳು

ಶಿವರಾಮು 
ಡಾ ಶಿವರಾಂ ಕಾರಂತ ಅವರ ಪುಸ್ತಕಗಳು 



















ಮಾಸ್ತಿ 
"ಚೆನ್ನಬಸವನಾಯಕ " ಕಾದಂಬರಿ (26 MB)




ಯಂಡಮೂರಿ ವೀರೇಂದ್ರನಾಥ್ ನೋವೆಲ್ಸ್ 



ಸುದರ್ಶನ ದೇಸಾಯಿ ಅವರ ಕಾದಂಬರಿಗಳು
  1)Airavata_tif.pdf
  2)Amar Deepa_tif.pdf  
  3)Badavana maneya Manikya_tif.pdf  
  4)Benkiya Madilalli_tif.pdf  
  5)Chinnada Beralu_tif.pdf
  6)Mruthyu Bandhan_tif.pdf 
  7)Seelu Nalige_tif.pdf  
  8)Sheetal Koli_tif.pdf  
  9)Vichitra Aparadhi_tif.pdf  
  10)Visha Manthan_tif.pdf  
  11)Yamadootaru_tif.pdf 

Tuesday, January 17, 2012

ಸಂಕ್ರಾಂತಿ ಪ್ರಾರ್ಥನೆ!

ಎಲ್ಲರಿಗು ಸಂಕ್ರಾಂತಿಯ ಶುಭಾಶಯಗಳು.
ಪ್ರದೀಪನ 'ಸಂ' ಕ್ರಾಂತಿ ಬಹಳ ಚೆನ್ನಾಗಿದೆ.
 
ಸ್ಪೂರ್ತಿಯಿಂದ ನನ್ನದೊಂದು ಪ್ರಾರ್ಥನೆ!.
 
++++++++++++++++++++++
ಬೆಳಗಾಯಿತೇಳಣ್ಣ ವೆಂಕಟರಮಣ
ಇಗೊ ಮತ್ತೆ ಬಂದಿದೆ ಮಕರ ಸಂಕ್ರಮಣ
 
ತಲೆಕೆಟ್ಟು ಸೂರ್ಯ ದಿಕ್ಕು ಬದಲಿಸಿದನಂತೆ 
ಮತ್ತದೇ ಊರ್ದ್ವ ಗಮನ ಅದೇ ಉತ್ತರಾಯಣ. 
 
ಪಾಪ ಅವನೇನು ಮಾಡುವನು ಸಕಲ ಗ್ರಹ ಬಲ ನೀನು
ಗ್ರಹಗಳಿಗೂ ಗ್ರಹಚಾರ ಕೊಡುವವನು ನೀನು
 
ಸೂರ್ಯನಿಗೆ ಮೀಸ್ಸಲ್ಲ ನಿನ್ನ ಈ ಪುಂಡಾಟ
ಭೂಮಿಗೂ ತಂದೆ ಸುಗ್ಗಿ ಹುಗ್ಗಿಯ ಕೂಟ
 
ಎಳ್ಳಿಗೂ ಬೆಲ್ಲಕೂ ಕೊಬ್ಬರಿಯ ಸಾಂಕರ್ಯ
ಚಪ್ಪರಿಸೋ ಬಾಯಿಗೆ ರುಚಿಯ ಕೈಂಕರ್ಯ 
 
ಬರಿದೆ ಬದುಕಿರುವವರಿಗಲ್ಲ ಈ ಸಂಕ್ರಮಣ ಉತ್ಕ್ರಮಣ
ಸತ್ತವರಿಗೂ ಉಂಟು ಸಾಂತ್ವನ ತಿಲ ತರ್ಪಣ
 
ಭಾರತೀಯನು ನಾನು ವಿಶ್ವಮಾನವನು
ವಲಸಿಗನು ನಾನು ಉರಿಜೊನದವನು
 
ಬೆಂಬಿಡದ ಬೇತಾಳ ಹಿಂಬಾಲಿಸಿದೆ ನೀನು
ಕೂಡಿಸಿದೆ ಸ್ನೇಹಿಗಳ ಮಾಡಿಸಿದೆ ಸ್ಮರಣೆಗಳ
 
ವಿಸ್ಮರಣ ಶೀಲನಿಗೆ ಸ್ಮರಣ ಶಕ್ತಿ
ಸ್ಮರಣೆಯ ಮಿತ್ರರಿಂ ಸ್ಫೂರ್ತಿ ಶಕ್ತಿ
 
ಬೆಳೆಸು ಬಳಗದ ಶಕ್ತಿ ಬೆಳಗು ಬಳಗದ ಯುಕ್ತಿ
ಪಡುವಣದಿ ಮೂಡಿಸೋ ಕನ್ನಡದ ಭಕ್ತಿ
 
ಅಡಿಗಡಿಗೆ ಇರಲಣ್ಣ ಈ ನಿನ್ನ ಕರುಣಾ
ಮರೆಯದೆ ನಡೆಸಣ್ಣ  ಟೆಂಪಿ ವೆಂಕಟಕೃಷ್ಣ
 
ಬೆಳಗಾಯಿತೇಳಣ್ಣ ವೆಂಕಟರಮಣ
ಇಗೊ ಮತ್ತೆ ಬಂದಿದೆ ಮಕರ ಸಂಕ್ರಮಣ
 
 
-ಪವಮಾನ

ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು!

ಹೊಸ ವರ್ಷದ ಹೊಸಿಲು ತುಳಿದು
ಮತ್ತೊಮ್ಮೆ ಬಂದಿದೆ ಸಂಕ್ರಾಂತಿ

ಈ ಬಾರಿಯಾದರೂ ಮಾಡೇ ಬಿಡುವಾ
some ಕ್ರಾಂತಿ ಎಂದೆನಿಸಿದೆ

ಸಂಭ್ರಮದ ಸುಗ್ಗಿ ಇಂದು
ಬಾಸುಮತಿ ಹುಗ್ಗಿ ತಿಂದು
ಐ.ಟಿ. ರೈತನಾದ ನಾನು
ಹಿತ್ತಲಲ್ಲಿ ಕೊತ್ತಂಬರಿ ಸೊಪ್ಪು
ಬೆಳೆದು ಬಿಡಲೇ?

ಹಿಮಾಲಯವನೇರಿದ ತೇನಸಿಂಗನೇ
ಸ್ಪೂರ್ತಿಯೆನಗೆ
ಕಾರು ಪಕ್ಕಕ್ಕಿಟ್ಟು
ಕಾಲ್ನಡಿಗೆಯಲ್ಲೇ
south mountain
ಏರಿ ಬಿಡಲೇ?

ಕ್ರಾಂತಿಕಾರಿ ಐಡಿಯಾಗಳು
ಹಲವಾರು
ಏನು ಮಾಡಿದರೇನು
ಭವ ಹಿಂಗದು
ದಾಸ ನಾನು
ಮಗನ ಮುಖಮಾರ್ಜನ
ಮನೆಯ ಒಪ್ಪ-ಓರಣ
ಮಾಡುವರೆಗೆ ಎಷ್ಟೇ ಹಿಗ್ಗಿದರೂ
ಹುಗ್ಗಿಯ ದರ್ಶನವಿಲ್ಲ

ಚಳಿ ಅಂತ ಸೂರ್ಯನೇ
ಬರ್ತಾನೆ ಲೇಟಾಗಿ
ಎದ್ದು ಮಾಡೋದೇನಿದೆ ಈಗ
ಅಂದ್ಳು ಹೆಂಡ್ತಿ ಲೈಟಾಗಿ
ಸಂಕ್ರಾಂತಿಯ  ಕಾಂತಿ
ತಂದ ಈ ಮೆಸೇಜ್ ನಿಂದ 
ಈಗ ಎಲ್ಲ ಕ್ಲಿಯರ್
ಓಂ ಶಾಂತಿ.. ಶಾಂತಿ.. ಶಾಂತಿ!

ಪ್ರದೀಪ್ 

Welcome!

ಆತ್ಮೀಯ ಸ್ಮರಣೆ ಗೆಳೆಯರಿಗೆ ಹಾರ್ದಿಕ ಸ್ವಾಗತ! 

ಕನ್ನಡ ಸಾಹಿತ್ಯ-ಸಂಸ್ಕೃತಿಯನ್ನು ಸ್ಮರಿಸುವ ಉದ್ದೇಶ ಹೊಂದಿರುವ ಅರಿಜೊನ ಕನ್ನಡ ಮಿತ್ರರ ಗುಂಪು, ಶ್ರೀ ಪ್ರಕಾಶ್ ಜೋಷಿ ಯವರ ನೇತೃತ್ವದಲ್ಲಿ ಕಳೆದ ವರ್ಷದಿಂದ ಸ್ಮರಣೆ ಕಾರ್ಯಕ್ರಮ ಆರಂಭಿಸಿರುವುದು ಸರಿಯಷ್ಟೇ. ಪ್ರತಿ ತಿಂಗಳ ಮೂರನೇ ಶನಿವಾರ ಮಧ್ಯಾಹ್ನ ಒಟ್ಟುಗೂಡಿ, ಅಗಾಧ ಕನ್ನಡ ಸಾಹಿತ್ಯ - ಕೃತಿ, ಕರ್ತೃ, ವಿಶೇಷಗಳನ್ನು ಮೆಲುಕು ಹಾಕುವ ವಿಚಾರ ಮಂಟಪವಾಗಿ ಪ್ರಾರಂಭವಾಗಿರುವ "ಸ್ಮರಣೆ" ಕಾರ್ಯಕ್ರಮವು, ಇದುವರಗೆ - ಮಂಕುತಿಮ್ಮನ ಕಗ್ಗ, ದಾಸ ಸಾಹಿತ್ಯ,  ವಚನ ಸಾಹಿತ್ಯ, ಬಾಲ್ಯದ ಮೆಚ್ಚಿನ ಪದ್ಯಗಳು, ಕನ್ನಡ ಲೇಖಕಿಯರು - ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದೆ.

ಪ್ರತಿ ಕ್ರಾರ್ಯಕ್ರಮದಲ್ಲೂ ನಾವು ಹಂಚಿಕೊಳ್ಳುವ ಹಲವಾರು ವಿಷಯಗಳು ಕೇವಲ ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರಿಗೆ ಹಾಗು ಆ ಕ್ಷಣಗಳಿಗೆ ಮಾತ್ರ ಸೀಮಿತವಾಗದೆ, ಅದನ್ನು ಇತರ ಕನ್ನಡ ಮಿತ್ರರ ಜೊತೆ ಹಂಚಿಕೊಳ್ಳುವ ಉದ್ದೇಶದಿಂದ ಈ ಬ್ಲಾಗ್ ನ್ನು ಆರಂಭಿಸಲಾಗಿದೆ. ಈ ಬ್ಲಾಗ್ ಸ್ಮರಣೆ ಮಿತ್ರರೆಲ್ಲರಿಗೂ ಸೇರಿದ್ದು. 

ಕನ್ನಡ ಮಿತ್ರರ ಮನದ ಮಾತುಗಳನ್ನು ಹಂಚಿಕೊಳ್ಳುವ ತಾಣವಾಗಿ ಇದು ಹೊರಹೊಮ್ಮುವುದೆಂಬ ಆಶಯದೊಂದಿಗೆ,
ಪ್ರದೀಪ್
 



 

.