ಸ್ವಾಗತ

ಆತ್ಮೀಯ ಸ್ಮರಣೆ ಗೆಳೆಯರಿಗೆ ಹಾರ್ದಿಕ ಸ್ವಾಗತ!

ಕನ್ನಡ ಸಾಹಿತ್ಯ-ಸಂಸ್ಕೃತಿಯನ್ನು ಸ್ಮರಿಸುವ ಉದ್ದೇಶ ಹೊಂದಿರುವ ಅರಿಜೊನ ಕನ್ನಡ ಮಿತ್ರರ ಗುಂಪು, ಶ್ರೀ ಪ್ರಕಾಶ್ ಜೋಷಿ ಯವರ ನೇತೃತ್ವದಲ್ಲಿ ಕಳೆದ ವರ್ಷದಿಂದ ಸ್ಮರಣೆ ಕಾರ್ಯಕ್ರಮ ಆರಂಭಿಸಿರುವುದು ಸರಿಯಷ್ಟೇ. ಪ್ರತಿ ತಿಂಗಳ ಮೂರನೇ ಶನಿವಾರ ಮಧ್ಯಾಹ್ನ ಒಟ್ಟುಗೂಡಿ, ಅಗಾಧ ಕನ್ನಡ ಸಾಹಿತ್ಯ - ಕೃತಿ, ಕರ್ತೃ, ವಿಶೇಷಗಳನ್ನು ಮೆಲುಕು ಹಾಕುವ ವಿಚಾರ ಮಂಟಪವಾಗಿ ಪ್ರಾರಂಭವಾಗಿರುವ "ಸ್ಮರಣೆ" ಕಾರ್ಯಕ್ರಮವು, ಇದುವರಗೆ - ಮಂಕುತಿಮ್ಮನ ಕಗ್ಗ, ದಾಸ ಸಾಹಿತ್ಯ, ವಚನ ಸಾಹಿತ್ಯ, ಬಾಲ್ಯದ ಮೆಚ್ಚಿನ ಪದ್ಯಗಳು, ಕನ್ನಡ ಲೇಖಕಿಯರು - ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದೆ.

ಪ್ರತಿ ಕ್ರಾರ್ಯಕ್ರಮದಲ್ಲೂ ನಾವು ಹಂಚಿಕೊಳ್ಳುವ ಹಲವಾರು ವಿಷಯಗಳು ಕೇವಲ ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರಿಗೆ ಹಾಗು ಆ ಕ್ಷಣಗಳಿಗೆ ಮಾತ್ರ ಸೀಮಿತವಾಗದೆ, ಅದನ್ನು ಇತರ ಕನ್ನಡ ಮಿತ್ರರ ಜೊತೆ ಹಂಚಿಕೊಳ್ಳುವ ಉದ್ದೇಶದಿಂದ ಈ ಬ್ಲಾಗ್ ನ್ನು ಆರಂಭಿಸಲಾಗಿದೆ.

ಕನ್ನಡ ಮಿತ್ರರ ಮನದ ಮಾತುಗಳನ್ನು ಹಂಚಿಕೊಳ್ಳುವ ತಾಣವಾಗಿ ಇದು ಹೊರಹೊಮ್ಮುವುದೆಂಬ ಆಶಯದೊಂದಿಗೆ,

ಪ್ರದೀಪ್

Tuesday, January 17, 2012

Welcome!

ಆತ್ಮೀಯ ಸ್ಮರಣೆ ಗೆಳೆಯರಿಗೆ ಹಾರ್ದಿಕ ಸ್ವಾಗತ! 

ಕನ್ನಡ ಸಾಹಿತ್ಯ-ಸಂಸ್ಕೃತಿಯನ್ನು ಸ್ಮರಿಸುವ ಉದ್ದೇಶ ಹೊಂದಿರುವ ಅರಿಜೊನ ಕನ್ನಡ ಮಿತ್ರರ ಗುಂಪು, ಶ್ರೀ ಪ್ರಕಾಶ್ ಜೋಷಿ ಯವರ ನೇತೃತ್ವದಲ್ಲಿ ಕಳೆದ ವರ್ಷದಿಂದ ಸ್ಮರಣೆ ಕಾರ್ಯಕ್ರಮ ಆರಂಭಿಸಿರುವುದು ಸರಿಯಷ್ಟೇ. ಪ್ರತಿ ತಿಂಗಳ ಮೂರನೇ ಶನಿವಾರ ಮಧ್ಯಾಹ್ನ ಒಟ್ಟುಗೂಡಿ, ಅಗಾಧ ಕನ್ನಡ ಸಾಹಿತ್ಯ - ಕೃತಿ, ಕರ್ತೃ, ವಿಶೇಷಗಳನ್ನು ಮೆಲುಕು ಹಾಕುವ ವಿಚಾರ ಮಂಟಪವಾಗಿ ಪ್ರಾರಂಭವಾಗಿರುವ "ಸ್ಮರಣೆ" ಕಾರ್ಯಕ್ರಮವು, ಇದುವರಗೆ - ಮಂಕುತಿಮ್ಮನ ಕಗ್ಗ, ದಾಸ ಸಾಹಿತ್ಯ,  ವಚನ ಸಾಹಿತ್ಯ, ಬಾಲ್ಯದ ಮೆಚ್ಚಿನ ಪದ್ಯಗಳು, ಕನ್ನಡ ಲೇಖಕಿಯರು - ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದೆ.

ಪ್ರತಿ ಕ್ರಾರ್ಯಕ್ರಮದಲ್ಲೂ ನಾವು ಹಂಚಿಕೊಳ್ಳುವ ಹಲವಾರು ವಿಷಯಗಳು ಕೇವಲ ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರಿಗೆ ಹಾಗು ಆ ಕ್ಷಣಗಳಿಗೆ ಮಾತ್ರ ಸೀಮಿತವಾಗದೆ, ಅದನ್ನು ಇತರ ಕನ್ನಡ ಮಿತ್ರರ ಜೊತೆ ಹಂಚಿಕೊಳ್ಳುವ ಉದ್ದೇಶದಿಂದ ಈ ಬ್ಲಾಗ್ ನ್ನು ಆರಂಭಿಸಲಾಗಿದೆ. ಈ ಬ್ಲಾಗ್ ಸ್ಮರಣೆ ಮಿತ್ರರೆಲ್ಲರಿಗೂ ಸೇರಿದ್ದು. 

ಕನ್ನಡ ಮಿತ್ರರ ಮನದ ಮಾತುಗಳನ್ನು ಹಂಚಿಕೊಳ್ಳುವ ತಾಣವಾಗಿ ಇದು ಹೊರಹೊಮ್ಮುವುದೆಂಬ ಆಶಯದೊಂದಿಗೆ,
ಪ್ರದೀಪ್
 



 

.

No comments:

Post a Comment